‘ತಾಲ್ಲೂಕಿನ ಗಂಗಾಪುರ, ಗುಡಗೂರ, ಮೈದೂರು, ಯತ್ತಿನಹಳ್ಳಿ, ಹೊನ್ನತ್ತಿ, ಕೆರಿಮಲ್ಲಾಪುರ, ಇಟಗಿ, ಹಲಗೇರಿ, ಮಣಕೂರ, ಕುದರಿಹಾಳ, ರಡ್ಡಿಯಲ್ಲಾಪುರ, ಯರೇಕುಪ್ಪಿ, ಅಸುಂಡಿ, ಕರೂರು, ಹಿರೇಬಿದರಿ, ಚಳಗೇರಿ, ಕುಪ್ಪೇಲೂರ ಮುಂತಾದ ಕಡೆಗಳಲ್ಲಿ ಒಣ ಮಣ್ಣಿನಲ್ಲಿಯೇ ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆಲ್ಲಿದ್ದಾರೆ. ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಮುಷ್ಟೂರಿನ ರೈತ ರವೀಂದ್ರಗೌಡ ಪಾಟೀಲ ಅಸಹಾಯಕತೆ ತೋಡಿಕೊಂಡಿದ್ದಾರೆ.