ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಪೊಲೀಸರಿಗೆ ಕರೆ ಮಾಡಿ ‘ನನ್ನ ಮೇಲೆ ಹಲ್ಲೆ ನಡೆಯುತ್ತಿದೆ’ ಎಂದು ದೂರು ಹೇಳಿದರು. ಸ್ಥಳಕ್ಕೆ ಬಂದ ಪಿಎಸ್ಐ ಪಾಪಣ್ಣ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರಾದ ದಿವಾಕರ್ ಮೂರ್ತಿ, ರಮೇಶ್, ನರಸಿಂಹರೆಡ್ಡಿ, ಮಧು, ನರೇಶ, ಅಶ್ವತ್ಥ, ರಮೇಶ್.ಆರ್.ಎನ್ ಅಶ್ವತ್ಥಮ್ಮ, ಸದಾಶಿವರೆಡ್ಡಿ ಇದ್ದರು.