ಜಿಲ್ಲೆಯಲ್ಲಿ 27198 ರೈತರು ತಮ್ಮ ಬೆಳೆಗಳಿಗೆ ₹9.72 ಕೋಟಿ, ಹವಾಮಾನ ಆಧರಿತ ವಿಮೆಯಲ್ಲಿ 1027 ರೈತರು ₹71 ಲಕ್ಷ ಪ್ರೀಮಿಯಂ ಹಣ ಕಟ್ಟಿದ್ದಾರೆ. ಕೂಡ್ಲಿಗಿ ತಾಲ್ಲೂಕು ಒಂದರಲ್ಲೇ 8,277 ರೈತರು ₹1.38 ಲಕ್ಷ ವಿಮೆ ಹಣ ಪಾವತಿ ಮಾಡಿದ್ದಾರೆ. ಆದರೆ ವಿಮಾ ಕಂಪೆನಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ತಾಲ್ಲೂಕಿನ ಯಾವುದೇ ಬೆಳೆ ಹಾನಿಯಾಗಿಲ್ಲ. ಸರಾಸರಿ ಇಳುವರಿಗಿಂತ ಹೆಚ್ಚು ಬೆಳೆ ಬಂದಿದೆ ಎಂದು ತಪ್ಪು ವರದಿ ನೀಡಿದ್ದಾರೆ.