ಕವಿತಾ ಶೇಖರ್ ಮಾತನಾಡಿ, ‘ಪರಿಶೀಲನೆ ವೇಳೆ ದುಬೈ ಶಾಪಿಂಗ್ ಸೆಂಟರ್ ಅವರು ಕಂದಾಯ ಪಾವತಿ ರಸೀತಿ, ಪರವಾನಗಿ ಪತ್ರ ತೋರಿಸಿಲ್ಲ. ಹೀಗಾಗಿ ಮಳಿಗೆ ಬಾಗಿಲು ಮುಚ್ಚಿಸಲಾಗಿದೆ. ಇನ್ನೊಂದು ಅಂಗಡಿಯವರು ಕಳೆದ ವರ್ಷದ ದಾಖಲೆ ತೋರಿಸಿದರು. ಈಗಿನ ದಾಖಲೆ ಗಳನ್ನು ಸೋಮವಾರ ಹಾಜರುಪಡಿಸಬೇಕು ಎಂದು ಅವರಿಗೆ ಸೂಚನೆ ನೀಡಲಾಗಿದೆ’ ಎಂದರು.