‘ವಾರಕ್ಕೊಮ್ಮೆ ನಡೆಯುವ ಸಂತೆಗೆ ತಾಲ್ಲೂಕಿನ ಗುಜ್ಜಾರಹಳ್ಳಿ, ಎಸ್.ಆರ್ ಪಾಳ್ಯ, ತುಮಕುಂಟೆ, ಕೊಂಡಾಪುರ, ಜಂಗಮರಹಳ್ಳಿ, ಹೊಸಹಳ್ಳಿ. ಆಂಧ್ರದ ಚಿಕ್ಕನಡುಕು, ಆಲದಹಳ್ಳಿ ಸೇರಿದಂತೆ ಹಲ ಗ್ರಾಮಗಳಿಂದ ಜನತೆ ಬರುತ್ತಾರೆ. ಸಮರ್ಪಕ ಬಸ್ ನಿಲ್ದಾಣ, ಕುಡಿಯುವ ನೀರು, ತಂಗುದಾಣ, ಶೌಚಾಲಯ ಸೌಲಭ್ಯಗಳು ಇಲ್ಲದೆ ಮಹಿಳೆಯರು, ಮಕ್ಕಳು ಪರದಾಡುವುದು ಸಾಮಾನ್ಯವಾಗಿದೆ.