ನಕ್ಸಲ್ಬರಿಯಲ್ಲಿ ತುರ್ತು ಕ್ರಮಕ್ಕೆ ಪ್ರಧಾನಿ ಒತ್ತಾಯ
ನವದೆಹಲಿ, ಜುಲೈ 9– ಪಶ್ಚಿಮ ಬಂಗಾಳದ ಉಪಮುಖ್ಯಮಂತ್ರಿ ಶ್ರೀ ಜ್ಯೋತಿ ಬಸು ಅವರು ಇಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ ನಕ್ಸಲ್ಬರಿಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ತುರ್ತು ಕ್ರಮಗಳನ್ನು ಕೈಗೊಂಡು ನಕ್ಸಲ್ಬರಿಯ ದಂಗೆಯನ್ನು ಶೀಘ್ರ ನಿಯಂತ್ರಣಕ್ಕೆ ತರಬೇಕು, ಇಲ್ಲದಿದ್ದರೆ ಬಂಡುಕೋರರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ಹೇಳಿರುವುದಾಗಿ ತಿಳಿದುಬಂದಿದೆ.