‘ಕಳೆದ ತಿಂಗಳು ಹುಬ್ಬಳ್ಳಿ– ಧಾರವಾಡ ನಗರದಲ್ಲಿ ಇಲ್ಲಿಯವರೆಗೆ 19 ಡೆಂಗಿ ಪ್ರಕರಣಗಳು ದಾಖಲಾಗಿವೆ. ಜನ ಜಾಗೃತಿ, ಫಾಗಿಂಗ್ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೀರಲ್ಲಿ ಸೊಳ್ಳೆಗಳ ಲ್ವಾರಾ ಪ್ರಮಾಣ ತಗ್ಗಿಸಲು ನಿಂತ ನೀರಿಗೆ ಅಬೇಟ್ ದ್ರಾವಣ ಹಾಗೂ ನಿತ್ಯ ಬಳಕೆಯ ಟ್ಯಾಂಕರ್ಗಳಿಗೆ ಟೆಂಪೊಸ್ ಔಷಧಿ ಸಿಂಪಡಣೆ ಮಾಡುತ್ತಿದ್ದು, ಈ ಕುರಿತು ಇದೇ 10ರಿಂದ ಹತ್ತು ದಿನಗಳ ಸಮೀಕ್ಷೆ ಪ್ರಾರಂಭಿಸಲಾಗಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ’ಪ್ರಜಾವಾಣಿ’ಗೆ ತಿಳಿಸಿದರು.