ಕ್ಯಾತನಾಳ ಮತ್ತು ಹೆಗ್ಗಣಗೇರಾ ಎರಡೂ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಬಿಜೆಪಿ ಅಭಿವೃದ್ಧಿ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು. ಜೈಗ್ರಾಂ ತಾಲ್ಲೂಕು ಪಂಚಾಯಿತಿ ಸದಸ್ಯ ಬಾಸ್ಕರೆಡ್ಡಿ ವಿಸ್ತಾರಕರಾಗಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಮುಖಂಡರಾದ ಸಣ್ಣಸಿದ್ರಾಮಪ್ಪಗೌಡ, ಭೀಮಣ್ಣಗೌಡ ಕ್ಯಾತನಾಳ, ಬಾಡಿಯಾಳ ತಾಲ್ಲೂಕು ಪಂಚಾಯಿತಿ ಸದಸ್ಯ ಬಸವ ರಾಜಪ್ಪಗೌಡ ಬೆಳಗುಂದಿ, ಸಂಜೀವ ರೆಡ್ಡಿ, ಬಸರಾಜಪ್ಪಗೌಡ ಬಳಿಚಕ್ರ. ಬಸವಂತ್ರಾಯಗೌಡ ಜೋಳದಡಗಿ ಇದ್ದರು.