‘ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಗಳಲ್ಲಿಯೂ ರವಿ ಹೆಸರು ಥಳಕು ಹಾಕಿ ಕೊಂಡಿತ್ತು. ರವಿ ಅವರು ಗ್ರಾಮವಾಸ್ತವ್ಯ ಮಾಡಿ ಕಬಡ್ಡಿ, ಕುಣಿತದ ಮೂಲಕ ಮನರಂಜನೆ ರಾಜಕಾರಣ ಮಾಡುತ್ತಿದ್ದಾರೆ. ಜನರ ಸಮಸ್ಯೆ ಪರಿಹರಿಸಲು ಗಮನಹರಿಸದೆ, ಅಸ್ತಿತ್ವ ಪ್ರದರ್ಶಿಸುತ್ತಿದ್ದಾರೆ. ಬೇರೆಯವರ ಮೇಲೆ ಅಪವಾದಗಳನ್ನು ಹೊರಿಸುವುದನ್ನು ಬಿಟ್ಟು, ತಮ್ಮನ್ನು ತಾವು ತಿದ್ದಿಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.