‘ಗ್ರಂಥಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರ ಹೆಸರನ್ನು ಇಡಲಾಗಿತ್ತು. ದಾನಿಗಳು ನೀಡುವ ಪುಸ್ತಕಗಳನ್ನು ಗ್ರಂಥಾಲಯ, ಶಾಲೆಗಳಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಗ್ರಂಥಾಲಯಗಳನ್ನು ಆಧುನೀಕರಿಸಿ ಸುಸಜ್ಜಿತಗೊಳಿಸಿದ್ದರೂ ಗ್ರಂಥಾಲಯ ಗಳನ್ನೇ ನೋಡದೇ ಇರುವ ಮಂದಿ ಸಾಕಷ್ಟಿದ್ದಾರೆ’ ಎಂದರು.