ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅನುಭವ

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಇದು ಎಸ್. ಉಮೇಶ್ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ನಾಯಕ ನಟ ಎಂಬ ಪರಿಕಲ್ಪನೆ ಇಲ್ಲ. ಚಿತ್ರದ ನಿರ್ಮಾಪಕ ಬಿ.ಆರ್. ರಮಣಪ್ಪ ಅವರು ಕಥೆ, ಸಾಹಿತ್ಯ, ಸಹಸಂಭಾಷಣೆ ಬರೆದಿದ್ದಾರೆ.

ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಎಸ್. ನಾರಾಯಣ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮನಾಭನ್, ರುದ್ರಾಣಿ ರಾಜ್, ಯಶಸ್ವಿನಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಎ.ಟಿ. ರವೀಶ್ ಸಂಗೀತ, ಎ.ವಿ. ರಮೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

2
‌‌ಹಂತಕರ ಪಡೆಯೊಂದರ ಕ್ರೌರ್ಯದ ಕುರಿತ ಸಿನಿಮಾ ಇದು. ಶ್ರೀನಿವಾಸ್ ರಾಜು ಅವರು ಇದರ ನಿರ್ದೇಶಕರು. ವೆಂಕಟ್ ಇದರ ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ, ವೆಂಕಟ್‍ ಪ್ರಸಾದ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೂಜಾ ಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೇದ್ರ ಪ್ರಸಾದ್ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಗ್ಯಾಪಲ್ಲೊಂದು ಸಿನಿಮಾ
ಶರವಣ್ ವೈದೇಹಿ ನಿರ್ಮಿಸಿರುವ ಸಿನಿಮಾ ಇದು. ಮಂಜು ಹೆದ್ದೂರು ನಿರ್ದೇಶನ, ಶ್ರೀಧರ್ ಕಶ್ಯಪ್ ಸಂಗೀತ, ನಾಗರಾಜ್ ರವಿಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ತಾರಾಬಳಗದಲ್ಲಿ ಶಶಿಕುಮಾರ್ (ಹೊಸ ಪರಿಚಯ), ಮಮತಾ ರಾವುತ್, ಪೃಥ್ವಿರಾಜ್, ನವೀನ್, ಶರವಣ್ ಮುಂತಾದವರು ಇದ್ದಾರೆ.

ಹಳ್ಳಿ ಪಂಚಾಯಿತಿ
ಪ್ರೇಮ ಯುವರಾಜು ನಿರ್ಮಿಸಿರುವ ಚಿತ್ರ ಹಳ್ಳಿ ಪಂಚಾಯಿತಿ. ಜಿ. ಉಮೇಶ್ ಇದರ ನಿರ್ದೇಶಕರು. ಎ.ಸಿ. ಮಹೇಂದ್ರನ್ ಛಾಯಾಗ್ರಹಣ, ಹರಿಕಾವ್ಯ ಸಂಗೀತ ಚಿತ್ರಕ್ಕಿದೆ. ಗಡ್ಡಪ್ಪ, ಸೆಂಚುರಿಗೌಡ, ಗೀತಾ, ಪ್ರೇಮ ಯುವರಾಜ್, ಅಭಿ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಪುಟಾಣಿ ಸಫಾರಿ
ಬಿ.ಎಸ್.ಚಂದ್ರಶೇಖರ್ ನಿರ್ಮಿಸಿರುವ ಮಕ್ಕಳ ಚಿತ್ರ ಇದು. ರವೀಂದ್ರ ವಂಶಿ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವೀರ್‍ ಸಮರ್ಥ್ ಸಂಗೀತ ಚಿತ್ರಕ್ಕಿದೆ. ಮನೀಶ್ ಬಲ್ಲಾಳ್, ಸಹನಶ್ರೀ, ಕೈಲಾಶ್, ಟಿ.ಪಿ.ಜಗದೀಶ್, ವಿಜಯ್ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT