ಬೇಗೂರಿನಲ್ಲೂ ಪರದಾಟ: ತಾಲ್ಲೂಕಿನ ಬೇಗೂರು ಗ್ರಾಮದ ನಾಡಕಚೇರಿಯಲ್ಲಿಯೂ ರೈತರು, ಜನರು ಸುದೀರ್ಘ ಕಾಲ ಕಾಯುವಂತಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ಇದ್ದು, ಇರುವ ಒಬ್ಬನೇ ಸಿಬ್ಬಂದಿ ಬೆಳೆ ದೃಢೀಕರಣ ಪತ್ರ, ಆರ್ಟಿಸಿ, ಜಾತಿ ಪ್ರಮಾಣ ಪತ್ರ, ಎಂಆರ್ ಕಾಪಿ, ಖಾತೆ ಬದಲಾವಣೆ ಸ್ಕೆಚ್ ಕಾಪಿ ಸೇರಿ ವಿವಿಧ ದಾಖಲೆಗಳನ್ನು ಒದಗಿಸಬೇಕಾಗಿದೆ. ಬೇಗೂರು ಹೋಬಳಿ ಕೇಂದ್ರ. ವಿವಿಧ ಗ್ರಾಮಗಳ ಜನರು ಇಲ್ಲಿಗೆ ಬರುತ್ತಾರೆ. ಹೀಗಾಗಿ, ಇಲ್ಲಿ ಅಧಿಕ ಕೌಂಟರ್ಗಳನ್ನು ತೆರೆಯುವುದು ಅಗತ್ಯವಿದೆ ಎಂದು ಆಗ್ರಹಪಡಿಸಿದ್ದಾರೆ.