ಸಾಲಗಾಮೆ, ಕಸಬಾ, ಶಾಂತಿಗ್ರಾಮ, ಕಟ್ಟಾಯ ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳಲ್ಲೂ ಸರಿಯಾಗಿ ರೈತರಿಗೆ ಪಹಣಿ ಲಭ್ಯವಾಗುತ್ತಿಲ್ಲ. ಇದರಿಂದ ಅನಾನುಕೂಲ ಉಂಟಾಗಿದೆ. ಕೂಡಲೇ ಹೆಚ್ಚುವರಿ ಕೌಂಟರ್ಗಳನ್ನು ತೆರೆದು ಪಹಣಿ ವಿತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಮಹಮ್ಮದ್ ತಲಾಹ, ಚಂದು, ಮುಖಂಡರಾದ ರವಿ, ರಘು, ಆಸ್ಲಾಂ, ರಾಮು ಇತರರು ಇದ್ದರು.