ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ವ್ಯಕ್ತಿ ಬಿಜೆಪಿ ಮುಖಂಡ

ಸಲೀಂ ಹತ್ತಿ ವ್ಯಾಪಾರಿ
Last Updated 14 ಜುಲೈ 2017, 9:22 IST
ಅಕ್ಷರ ಗಾತ್ರ

ನಾಗಪುರ: ದನದ ಮಾಂಸ ಸಾಗಿಸುತ್ತಿದ್ದಾರೆಂಬ ಶಂಕೆಯಿಂದ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಭರಸಿಂಗಿ ಗ್ರಾಮದಲ್ಲಿ ಬುಧವಾರ ಹಲ್ಲೆಗೊಳಗಾದ ಸಲೀಂ ಇಸ್ಮಾಯಿಲ್‌ ಶೇಖ್‌ ಬಿಜೆಪಿ ಮುಖಂಡ ಎಂಬುದು ಗೊತ್ತಾಗಿದೆ.

ಸಲೀಂ ಇಸ್ಮಾಯಿಲ್‌ ಬಿಜೆಪಿಯ ಕಾಟೋಲ್‌ ತಾಲ್ಲೂಕು ಘಟಕದ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಬಿಜೆಪಿ ಮುಖಂಡ ಎಂಬುದು ತಿಳಿಯದೆ ಗೋರಕ್ಷಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಬುಧವಾರ ಹಲ್ಲೆಗೊಳಗಾಗಿದ್ದ ಸಲೀಂ

ಸಲೀಂ ಸಮಾರಂಭವೊಂದಕ್ಕೆ ಅಡುಗೆ ತಯಾರಿಸಲು ಬೈಕ್‌ನಲ್ಲಿ ಮಾಂಸ ತೆಗೆದುಕೊಂಡು ಹೋಗುತ್ತಿದ್ದರು. ಭರಸಿಂಗಿಯಲ್ಲಿ ಅವರ ಬೈಕ್‌ ತಡೆದಿದ್ದ ಗೋ ರಕ್ಷಕರ ಗುಂಪು, ಸಲೀಂ ದನದ ಮಾಂಸ ವ್ಯಾಪಾರಿ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT