ಹಿನ್ನೆಲೆ: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂದಿಹಳ್ಳಿ, ಮುದೇನೂರು, ಹುಗಲೂರು ಗ್ರಾಮಗಳಲ್ಲಿ ನರೇಗಾ ಯೋಜನೆ ಅಡಿ 45 ದನದ ಕೊಟ್ಟಿಗೆಗಳಿಗೆ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ಹಣ ಲಪಟಾಯಿಸಲಾಗಿದೆ. ಮೃತಪಟ್ಟಿರುವ ವ್ಯಕ್ತಿಗಳ ಹೆಸರಿಗೂ ಕೂಲಿ ಪಾವತಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿ ಆಮ್ ಆದ್ಮಿ ಪಾರ್ಟಿ ಸಂಚಾಲಕರಾಗಿದ್ದ ನಂದಿಹಳ್ಳಿ ಮಹೇಂದ್ರ ಜಿಲ್ಲಾ ಪಂಚಾಯ್ತಿಗೆ ದಾಖಲೆಗಳೊಂದಿಗೆ ದೂರು ನೀಡಿದ್ದರು.