ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿರುವ ಎಚ್.ಎನ್. ಸುರೇಶ್ (ಜನನ: 1950) ಬೆಂಗಳೂರಿನ ಸಾಂಸ್ಕೃತಿಕ ಕ್ಷೇತ್ರದ ಸುಪರಿಚಿತ ಹೆಸರು. ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮ, ಗಾಂಧಿ ಕುರಿತ ಅಧ್ಯಯನ, ಪುಸ್ತಕ-ನಿಯತಕಾಲಿಕಗಳ ಪ್ರಕಟಣೆ ಹೀಗೆ ಹತ್ತಾರು ಕೆಲಸಗಳ ಹೊಣೆ ಹೊತ್ತಿದ್ದಾರೆ. ಕೇಂದ್ರ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ನ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಮುಂದುವರೆಯುತ್ತಿದ್ದಾರೆ.