ಹಿರಿಯ ವೀಣಾವಾದಕರಾಗಿದ್ದ ಕೃಷ್ಣಮೂರ್ತಿ ದಕ್ಷ ಬೋಧಕರೂ ಹೌದು. ಮೈಸೂರು ಬಾನಿಯ ಉಳಿವು, ಬೆಳವಣಿಗೆಗೂ ತಮ್ಮ ಕೈಂಕರ್ಯ ಸಲ್ಲಿಸಿದ್ದಾರೆ. ತಮ್ಮ 56ನೇ ವಯಸ್ಸಿನಲ್ಲೇ ನಿಧನರಾದ ಕೃಷ್ಣಮೂರ್ತಿ ಸಂಸ್ಮರಣೆಗಾಗಿ ಅವರ ಮನೆಯವರು ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ, 25ನೇ ಪುಣ್ಯ ದಿನಾಚರಣೆ ನಿಮಿತ್ತ 10 ಗಂಟೆಗಳ ನಿರಂತರ ಕಛೇರಿ ನಡೆಸುತ್ತಿರುವುದು ಅಭಿನಂದನೀಯ.