ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
‘ತಾಲ್ಲೂಕುಗಳಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಗ್ರಾಮಸಭೆ ನಡೆಸಿ, ತಾಲ್ಲೂಕು ರಚನೆ ಸಂಬಂಧ ಹೊರಡಿಸಿರುವ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ’ ಎಂದು ಅವರು ಸಲಹೆ ನೀಡಿದರು. ‘ಗ್ರಾಮಗಳ ಸೇರ್ಪಡೆ ವೇಳೆ ಗಡಿ ಗ್ರಾಮಗಳ ಜನರ ಅಭಿಪ್ರಾಯಕ್ಕೂ ಪ್ರಾಮ್ಯುಖ ನೀಡಿ’ ಎಂದು ಅವರು ಒತ್ತಾಯಿಸಿದರು.