ಸುದ್ದಿಗಾರರೊಂದಿಗೆ ಮಾತನಾಡಿದ ರೈತರು, ‘ಕೇವಲ ಮೂರು ದಿನ ಇರುವಂತೆ ಪಹಣಿ ವಿತರಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಒಂದು ಕಡೆ ಮಾತ್ರ ಕೊಡುತ್ತಿದ್ದು, ಇನ್ನು ಹೋಬಳಿ ಮಟ್ಟದಲ್ಲಿ ಕೇಳಲು ಹೋದರೇ ಸರ್ವರ್ ತೊಂದರೆ ಕೊಡಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಊಟಕ್ಕೆಂದು ಮಧ್ಯಾಹ್ನ 12ಕ್ಕೆ ಬಂದ್ ಮಾಡಿ 3 ಗಂಟೆಯಾದರೂ ಪಹಣಿ ಕೊಡಲು ಮುಂದಾಗಲಿಲ್ಲ’ ಎಂದು ದೂರಿದರು.