ವಿದ್ಯಾರ್ಥಿಗಳು 3X2 ಅಡಿ ಗುಂಡಿ ತೆಗೆದು ಅಜೋಲಾ ಉತ್ಪತ್ತಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೈವಿಕ ಅನಿಲ ತಯಾರಿಕೆ ಮತ್ತು ಬೀಜೋಪಚಾರದ ಬಗ್ಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು, ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಾಜು, ಮಾಜಿ ಅಧ್ಯಕ್ಷ ಮಂಜುನಾಥ್, ರಮೇಶ್, ರೈತರು ಜಿಕೆವಿಕೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.