<p><strong>–ಡಾ.ಪದ್ಮಿನಿ ನಾಗರಾಜು</strong></p>.<p>ಶಾಕ್ಯ ವಂಶದ ಕುಡಿ<br /> ಶುದ್ಧೋದನನ ಕನಸು<br /> ತನ್ನದೆಲ್ಲವ ಬಿಟ್ಟು<br /> ನನ್ನ ಬಳಿ ಬರುವೆನೆಂದಾಗ<br /> ನಾನು ಹುಟ್ಟಿದ್ದಕ್ಕೂ ಬೇರೂ ಬಿಟ್ಟಿದ್ದಕ್ಕೂ<br /> ಅರಳಿ ಮರವಾಗಿದ್ದಕ್ಕೂ<br /> ಸಾರ್ಥಕವೆಂದುಕೊಂಡೆ</p>.<p>ಲುಂಬಿನಿಯ ಕಂದ ಸಿದ್ಧಾರ್ಥ<br /> ಜಗದ ಜಂಜಡ ತೊರೆದು<br /> ಸಂಸಾರದ ಬೇಡಿ ಕಿತ್ತೊಗೆದು<br /> ಕ್ಷತ್ರಿಯತೆಯಿಂದ ಸನ್ಯಾಸಕ್ಕೆ<br /> ಹೊರಳುವುದು ಸಾಮಾನ್ಯವೇ</p>.<p>ಮಾಯವತಿಯ ಮಡಿಲ ಮಗು<br /> ಯಶೋಧರೆಯ ಮನದನ್ನ<br /> ರಾಹುಲನ ಪಿತ ಸಂಕೋಲೆಗಳ<br /> ಬಿಡಿಸಿಕೊಳ್ಳುವುದೇನು ಸುಲಭವೇ</p>.<p>ಸಿದ್ಧಾರ್ಥ ಎಲ್ಲವ ಗೆದ್ದ<br /> ದಾರಿಯಲ್ಲಿ ಕಂಡ ಸತ್ಯವ<br /> ಅರಸಿ ನಡುರಾತ್ರಿ ನಡೆದ<br /> ಕಾಡಿದ ಪ್ರಶ್ನೆಗಳಿಗೆಲ್ಲಾ<br /> ಉತ್ತರದ ಹುಡುಕಾಟ</p>.<p>ನನ್ನ ಬಳಿ ಬಂದಾಗ<br /> ಅವನಲ್ಲಿ ಅದೆಷ್ಟು ಚಿಂತೆ<br /> ಲೋಕದ ದುಃಖ ದುಗುಡವ<br /> ಪರಿಹರಿಪ ತವಕದ ಚಡಪಡಿಕೆ</p>.<p>ನನ್ನ ವಿಶಾಲ ವಿಸ್ತಾರ ಬೇರುಗಳ<br /> ಮೇಲೆ ಕುಳಿತು ಧ್ಯಾನಸ್ಥನಾದ<br /> ಶಬ್ದಗಳೆಲ್ಲ ಕರಗಿ ನಿಶಬ್ದವಾದವು<br /> ಮಾತು ಮೌನವಾದವು<br /> ತನ್ನ ಅರಿವು ಜಗದಗಲ ಮುಗಿಲಗಲವಾದಾಗ<br /> ಬುದ್ಧ ಎದ್ದ</p>.<p>ಬುದ್ಧ ಬಯಲಲ್ಲಿ ಹಿಮಾಲಯದಲ್ಲಿ<br /> ಬೇರೆಲ್ಲೋ ತನ್ನ ತಾ ಕಾಣಬಹುದಿತ್ತು<br /> ನನ್ನ ಬಳಿ ಬರುವ ಕೃಪೆ ತೋರಿದ್ದು<br /> ಬೇರು ನೆರಳು ಆಶ್ರಯದ ಅಗ್ಗಳಿಕೆ<br /> ಜಗಕೆ ಅರುಹಲೆಂದೇ?</p>.<p>ಮಾಯವತಿ ಸಾಗುವಾನಿ ಮರದ<br /> ನೆಳಲಲ್ಲಿ ಹೆತ್ತ ಮಗುವನ್ನು<br /> ಬೋಧಿವೃಕ್ಷ ದೇವನಾಗಿಸಿದ<br /> ಮರದ ಮಹತ್ತಿನ ಕತೆ<br /> ಇಂದಿನ ಮರಭಕ್ಷಕರಿಗೆ<br /> ಪಾಠವಾಗಬೇಕಿದೆ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>–ಡಾ.ಪದ್ಮಿನಿ ನಾಗರಾಜು</strong></p>.<p>ಶಾಕ್ಯ ವಂಶದ ಕುಡಿ<br /> ಶುದ್ಧೋದನನ ಕನಸು<br /> ತನ್ನದೆಲ್ಲವ ಬಿಟ್ಟು<br /> ನನ್ನ ಬಳಿ ಬರುವೆನೆಂದಾಗ<br /> ನಾನು ಹುಟ್ಟಿದ್ದಕ್ಕೂ ಬೇರೂ ಬಿಟ್ಟಿದ್ದಕ್ಕೂ<br /> ಅರಳಿ ಮರವಾಗಿದ್ದಕ್ಕೂ<br /> ಸಾರ್ಥಕವೆಂದುಕೊಂಡೆ</p>.<p>ಲುಂಬಿನಿಯ ಕಂದ ಸಿದ್ಧಾರ್ಥ<br /> ಜಗದ ಜಂಜಡ ತೊರೆದು<br /> ಸಂಸಾರದ ಬೇಡಿ ಕಿತ್ತೊಗೆದು<br /> ಕ್ಷತ್ರಿಯತೆಯಿಂದ ಸನ್ಯಾಸಕ್ಕೆ<br /> ಹೊರಳುವುದು ಸಾಮಾನ್ಯವೇ</p>.<p>ಮಾಯವತಿಯ ಮಡಿಲ ಮಗು<br /> ಯಶೋಧರೆಯ ಮನದನ್ನ<br /> ರಾಹುಲನ ಪಿತ ಸಂಕೋಲೆಗಳ<br /> ಬಿಡಿಸಿಕೊಳ್ಳುವುದೇನು ಸುಲಭವೇ</p>.<p>ಸಿದ್ಧಾರ್ಥ ಎಲ್ಲವ ಗೆದ್ದ<br /> ದಾರಿಯಲ್ಲಿ ಕಂಡ ಸತ್ಯವ<br /> ಅರಸಿ ನಡುರಾತ್ರಿ ನಡೆದ<br /> ಕಾಡಿದ ಪ್ರಶ್ನೆಗಳಿಗೆಲ್ಲಾ<br /> ಉತ್ತರದ ಹುಡುಕಾಟ</p>.<p>ನನ್ನ ಬಳಿ ಬಂದಾಗ<br /> ಅವನಲ್ಲಿ ಅದೆಷ್ಟು ಚಿಂತೆ<br /> ಲೋಕದ ದುಃಖ ದುಗುಡವ<br /> ಪರಿಹರಿಪ ತವಕದ ಚಡಪಡಿಕೆ</p>.<p>ನನ್ನ ವಿಶಾಲ ವಿಸ್ತಾರ ಬೇರುಗಳ<br /> ಮೇಲೆ ಕುಳಿತು ಧ್ಯಾನಸ್ಥನಾದ<br /> ಶಬ್ದಗಳೆಲ್ಲ ಕರಗಿ ನಿಶಬ್ದವಾದವು<br /> ಮಾತು ಮೌನವಾದವು<br /> ತನ್ನ ಅರಿವು ಜಗದಗಲ ಮುಗಿಲಗಲವಾದಾಗ<br /> ಬುದ್ಧ ಎದ್ದ</p>.<p>ಬುದ್ಧ ಬಯಲಲ್ಲಿ ಹಿಮಾಲಯದಲ್ಲಿ<br /> ಬೇರೆಲ್ಲೋ ತನ್ನ ತಾ ಕಾಣಬಹುದಿತ್ತು<br /> ನನ್ನ ಬಳಿ ಬರುವ ಕೃಪೆ ತೋರಿದ್ದು<br /> ಬೇರು ನೆರಳು ಆಶ್ರಯದ ಅಗ್ಗಳಿಕೆ<br /> ಜಗಕೆ ಅರುಹಲೆಂದೇ?</p>.<p>ಮಾಯವತಿ ಸಾಗುವಾನಿ ಮರದ<br /> ನೆಳಲಲ್ಲಿ ಹೆತ್ತ ಮಗುವನ್ನು<br /> ಬೋಧಿವೃಕ್ಷ ದೇವನಾಗಿಸಿದ<br /> ಮರದ ಮಹತ್ತಿನ ಕತೆ<br /> ಇಂದಿನ ಮರಭಕ್ಷಕರಿಗೆ<br /> ಪಾಠವಾಗಬೇಕಿದೆ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>