‘ಸ್ಫೋಟಕ ಮಾಹಿತಿ ಎನ್ನುತ್ತೀರಿ. ಅದನ್ನು ಪೊಲೀಸರಿಗೆ ಕೊಡುವುದಿಲ್ಲ. ಎನ್ಐಎಗೆ ಹಸ್ತಾಂತರಿಸುವುದಾಗಿ ಹೇಳುತ್ತೀರಿ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದರೆ ಹೇಗೆ’ ಎನ್ನುವ ಪ್ರಶ್ನೆಯನ್ನು ಖಾದರ್ ಅವರು ಶನಿವಾರ ಮಂಗಳೂರಿನಲ್ಲಿ ಪತ್ರಕರ್ತರ ಮುಂದಿಟ್ಟರು. ‘ಮಾಹಿತಿ ಮುಚ್ಚಿಡುವುದೂ ಕಾನೂನಿನ ಪ್ರಕಾರ ಅಪರಾಧವೇ’ ಎನ್ನುವ ಮೂಲಕ ಈ ಪ್ರಕರಣ ಭೇದಿಸಲು ಶ್ರೀಗಳು ಸಹಕಾರ ನೀಡಬೇಕು ಎಂದರು.
ಸಚಿವರಾಗಿ ನಾವು ಗಾಯಾಳುಗಳನ್ನು ಭೇಟಿ ಮಾಡುವುದೂ ತಪ್ಪಾಗುತ್ತದೆ. ಭೇಟಿ ಮಾಡದೇ ಇದ್ದರೂ ಟೀಕೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಏನು ಮಾಡಬೇಕು ಎನ್ನುವ ಗೊಂದಲ ಶುರುವಾಗುತ್ತದೆ. ಶ್ರೀಗಳು ಮಾಹಿತಿಯನ್ನು ಸಂಬಂಧಿಸಿದವರೆಗೆ ಹಸ್ತಾಂತರಿಸಿದರೆ, ಎಲ್ಲ ತೊಂದರೆಗಳು ನಿವಾರಣೆ ಆಗುತ್ತವೆ. ಜಿಲ್ಲೆಯಲ್ಲಿ ಶಾಂತಿಯೂ ನೆಲೆಸುತ್ತದೆ. ಆ ಮಾಹಿತಿಯನ್ನು ಕೊಟ್ಟು ಬಿಡಿ ಎಂಬ ಮನವಿ ಸಚಿವರಿಂದ ಕೇಳಿ ಬಂತು.