ತರೀಕೆರೆ: ‘ನಾವು ಅನೇಕ ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಸರ್ಕಾರದಿಂದ ನಿವೇಶನವಾಗಲಿ ಅಥವಾ ಮನೆಗಳನ್ನಾಗಲಿ ಪಡೆದಿಲ್ಲ. ಯಾವ ಸೌಲಭ್ಯಗಳೂ ನಮಗೆ ದೊರಕುತ್ತಿಲ್ಲ’ ಎಂದು ಲಿಂಗದಹಳ್ಳಿ ಹೋಬಳಿಯ ಶಾಂತಿನಗರ ನಿವಾಸಿಗಳು ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯ ಗೋಪಿಕೃಷ್ಣ ಅವರಲ್ಲಿ ದೂರಿದರು.
ಲಿಂಗದಹಳ್ಳಿ ಗ್ರಾಮಕ್ಕೆ ಅನುಸೂಯ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆ ಗಳನ್ನು ಹೇಳಿಕೊಂಡ ನಿವಾಸಿಗಳು, ‘ಗ್ರಾಮ ಪಂಚಾಯಿತಿಯಿಂದಾಗಲಿ ಅಥವಾ ಯಾವುದೇ ಇಲಾಖೆ ಯಿಂದಾ ಗಲಿ ನಮಗೆ ಸಾಲ ಸೌಲಭ್ಯಗಳು ದೊರಕು ತ್ತಿಲ್ಲ. ತಮ್ಮ ನೆರವಿಗೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.
ಅನುಸೂಯ ಗೋಪಿಕೃಷ್ಣ ಮಾತನಾಡಿ, ‘ಸರ್ಕಾರದ ವಿವಿಧ ಯೋಜನೆಯಡಿ ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ವಿವಿಧ ಸೌಲಭ್ಯಗಳು ದೊರಕುತ್ತಿವೆ. ಕೈ ಕಸುಬುಗಳ ಮೂಲಕ ಸ್ವಾವಲಂಬಿಗಳಾಗಲು ಸಹಾಯಧನದಲ್ಲಿ ಹೊಲಿಗೆ ಯಂತ್ರಗಳ ಸೌಲಭ್ಯದ ಅವಕಾಶವಿದೆ.
ಸಂಬಂಧಪಟ್ಟ ಇಲಾಖೆ ಯ ಅಧಿಕಾರಿಗಳ ಗಮನಕ್ಕೆ ತಂದು ಸಹಾಯ ಮಾಡುತ್ತೇನೆ’ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶಪ್ಪ, ಮುಖಂಡರಾದ ಸುರೇಶ್, ಮಂಜೇಗೌಡ, ಸ್ವಾಮಿ, ಕುಮಾರ, ರವಿ, ವಿಶ್ವನಾಥ, ಸವಿತಾ ಇದ್ದರು.