ಕಾಳಗಿಯಿಂದ ಆಳಂದ, ಹುಮನಾಬಾದ್ ಮತ್ತು ಬೀದರ್ ಹೋಗಲು ಇರುವ ಕಾಳಗಿ–ಚಿಂಚೋಳಿ ಎಚ್.– ಹೇರೂರ– ನಾಗೂರ–ಮಹಾಗಾಂವ್ ಕ್ರಾಸ್ ನಡುವಿನ ಈ ಸಂಪರ್ಕ ರಸ್ತೆ, ಚಿಂಚೋಳಿ ಎಚ್.–ಹೇರೂರ ಮಧ್ಯೆ ಸಂಪೂರ್ಣ ಕಿತ್ತುಹೋಗಿ ಹಾಳಾಗಿದೆ. ರಸ್ತೆಯ ಎಲ್ಲೆಂದರಲ್ಲಿ ಜಲ್ಲಿಕಲ್ಲು ತೇಲಿಕೊಂಡು ತಗ್ಗುಗುಂಡಿ ಬಿದ್ದು ಡಾಂಬರ್ ಕಳಚಿಹೋಗಿದೆ. ರಸ್ತೆ ಪಕ್ಕದ ಚಿಂಚೋಳಿ ಎಚ್., ಬಣಮಗಿ, ಕಲ್ಲಹಿಪ್ಪರ್ಗಿ, ಶೆಳ್ಳಗಿ ಊರಿನ ಸಮೀಪದಲ್ಲಿ ಬೋರವೆಲ್ ನೀರು, ನಲ್ಲಿ ನೀರು, ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಜನ, ಜಾನುವಾರು ಓಡಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.