ಶಿರಸಿ: ಸಂಘಟನೆಗಳ ಮೂಲಕ ಜೇನು ಕೃಷಿ ಕೈಗೊಂಡು ಅದಕ್ಕೆ ಉದ್ಯಮ ಸ್ವರೂಪ ನೀಡಬೇಕು ಎಂದು ತೋಟಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಘುನಾಥ ಆರ್. ಸಲಹೆ ಮಾಡಿದರು. ತೋಟಗಾರಿಕಾ ಕಾಲೇಜು, ತೋಟ ಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಆಶ್ರಯ ದಲ್ಲಿ ಶುಕ್ರವಾರ ಇಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಜೇನು ಬೆಳೆಗಾರರ ಸಂಘ ಪರಿವಾರ ರಚನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.