‘ಗ್ರಾಮದ ಸರ್ವೆ ನಂ. 56ರ ಅರಣ್ಯ ಪ್ರದೇಶದಲ್ಲಿ 4 ಎಕರೆ ಪಾಳು ಬಿದ್ದ ಜಾಗವಿದೆ. ಅಲ್ಲಿ 1974ರಿಂದ ನಮ್ಮ ಹಿರಿಯರಾದಿಯಾಗಿ ನಾವು ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಅಂದಿನಿಂದಲೂ ಆ ಜಾಗ ನಮ್ಮ ಬದುಕಿಗೆ ದಾರಿಯಾಗಿದೆ. ಅಲ್ಲಿ ಯಾವುದೇ ರೀತಿಯ ಬೆಲೆಬಾಳುವ ಮರಗಳಿಲ್ಲ. ಹಾಗಾಗಿ, ಆ ಜಾಗವನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಕೊಡಬೇಕು’ ಎಂದು ಆಸಂಗೆಪ್ಪ ನಕ್ಕರಗುಂದಿ ಅರಣ್ಯ ಅಧಿಕಾರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.