‘ಸರ್ಕಾರದಿಂದ ಗ್ರಾಮದಲ್ಲಿ ಒಂಬತ್ತು ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಕ್ಕಿಲ್ಲ. ಇದರಿಂದ ಬೇಸತ್ತ ಯುವಕರು ಗ್ರಾಮದ ಮನೆಗಳಲ್ಲಿ ಚಂದಾ ಎತ್ತಿ ಕೊಳವೆಬಾವಿ ತೆಗೆಸಿದರು. ಆದರೆ, ಆಗಲೂ ನೀರು ಸಿಗಲಿಲ್ಲ. ಹೀಗಾಗಿ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದರು.ಇದೇವೇಳೆ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರೂ ಗ್ರಾಮದಲ್ಲಿ ಎರಡು ಕೊಳವೆಬಾವಿ ಕೊರಸಿದರು. ಆಗಲೂ ನೀರು ಸಿಕ್ಕಿರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.