ಸಮೀಪದ ಚಂದ್ರವನ ಆಶ್ರಮದಲ್ಲಿ ಸೋಮವಾರ ನಡೆದ ‘ಧಾರ್ಮಿಕ ಮತ್ತು ಪರಮಾರ್ಥ ಸಾಧಕರಿಗಾಗಿ ಪುನಶ್ಚೇತನ ಕಾರ್ಯಾಗಾರ’ದಲ್ಲಿ ಅವರು ‘ಸಮತೋಲನ ಸಾಧನೆ ಮತ್ತು ಸಂತೃಪ್ತಿಯ ಸಂಪಾದನೆ’ ಕುರಿತು ವಿಷಯ ಮಂಡಿಸಿದರು. ‘ಮಠಾಧೀಶ ಎಂದರೆ ಭರವಸೆಯ ವ್ಯಕ್ತಿ ಎಂದು ಸಮಾಜ ಭಾವಿಸಿದೆ. ಈ ಭಾವನೆ ಹುಸಿಯಾಗದಂತೆ ಎಚ್ಚರ ವಹಿಸಬೇಕು. ಮಠಾಧೀಶರು ವಿಜ್ಞಾನಿಯಂತೆ ಮಾತ್ರವಲ್ಲದೆ ತತ್ವಜ್ಞಾನಿಯಂತೆಯೂ ಆಲೋಚನೆ ಮಾಡಬೇಕು. ಮಠದ ಅಭಿವೃದ್ಧಿ, ಆಸ್ತಿ ಸಂಪಾದನೆಗಾಗಿ ಇರಬಾರದು. ಆದರ್ಶಕ್ಕಾಗಿ ಸ್ವಾಮೀಜಿಗಳು ಇರಬೇಕು. ತಮ್ಮ ಮೆದುಳಿಗೆ ದೂಳು ಹತ್ತದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.