ಅದು ಪರ್ಚಂಡಿ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಮಾತು ಆರಂಭಿಸಿದ ಸಿನಿಮಾ ನಿರ್ಮಾಪಕ ಕೆ.ಸಿ. ಶಿವಾನಂದ್, 'ನಲವತ್ತು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶಗಳ ಜನರ ಜೀವನ, ಉಡುಗೆ, ಉದ್ಯೋಗ ಹಾಗೂ ಇತರ ಸಂಗತಿಗಳ ಬಗ್ಗೆ ವಿಸ್ತಾರವಾಗಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ. ಇಂದಿನ ಜನರಿಗೆ ತಮ್ಮ ಹಿಂದಿನವರ ವೃತ್ತಿ ಬಗ್ಗೆ ಅರಿವು ಮೂಡಿಸುವ ಯತ್ನವನ್ನೂ ಮಾಡಲಾಗಿದೆ' ಎಂದು ಹೇಳಿದರು.