ಮಹದಾಯಿ, ಕಳಸಾ - ಬಂಡೂರಿ ಹೋರಾಟ ಎರಡು ವರ್ಷ ಪೂರ್ಣಗೊಳಿಸಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿರುವುದು ಶೊಚನೀಯ ಸಂಗತಿ.
ನೂರಾರು ಜನರು ನಿತ್ಯವೂ ಹೋರಾಟ ಮಾಡಿದರೂ ಆಳುವವರಿಗೆ ಕರುಣೆ ಮೂಡುತ್ತಿಲ್ಲ. ಜನರ ಚಳವಳಿ, ಹೋರಾಟ, ಪ್ರತಿಭಟನೆಗಳಿಗೆ ಬೆಲೆ ಇಲ್ಲ ಎಂದಮೇಲೆ ಪ್ರಜಾಪ್ರಭುತ್ವಕ್ಕೆ ಏನು ಬೆಲೆ? ಪ್ರಜ್ಞಾವಂತರು, ಕುಟುಂಬದ ಜೀವನ ನಿರ್ವಹಣೆ ಹೊಣೆ ಹೊತ್ತವರು ಮುಂದಿನ ದಿನಗಳಲ್ಲಿ ಖಂಡಿತ ಇಂಥ ಹೋರಾಟಗಳ ಮುಂದಾಳತ್ವ ವಹಿಸಲು ಉದಾಸೀನ ತೋರಿಸುವರು.