ನಾಗರಹೊಳೆ ಅಭಯಾರಣ್ಯದಿಂದ 3,418 ಗಿರಿಜನ ಕುಟುಂಬಗಳನ್ನು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ಥಳಾಂತರ ಮಾಡಲಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಈ ಕುರಿತು ಪರಿಶೀಲನೆ ನಡೆದಿದ್ದು, ವರದಿಯಲ್ಲಿರುವ 3,418 ಗಿರಿಜನರ ಕುಟುಂಬಗಳ ಪೈಕಿ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 1,801, ಹುಣಸೂರು ತಾಲ್ಲೂಕಿನಲ್ಲಿ 1,106 ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ 511 ಕುಟುಂಬಗಳಿವೆ. ಇವರಲ್ಲಿ ಡಬಲ್ ಎಂಟ್ರಿ ಮತ್ತು ಬೀಚನಹಳ್ಳಿ ಕಬಿನಿ ಡ್ಯಾಂ ನಿರ್ಮಾಣ ವೇಳೆ ಸ್ಥಳಾಂತರಗೊಂಡಿದ್ದ ಗಿರಿಜನರು ಸಹ ಇದ್ದಾರೆ ಎಂದು ಹೇಳಿದರು.