ಅಭಿನಂದನೆ ಸ್ವೀಕರಿಸಿದ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ತುಮಕೂರಿನ ಕೆಂಪಹೊನ್ನಯ್ಯ ‘ನಾನೂ ಹಳ್ಳಿಯಲ್ಲಿ ದನ, ಕುರಿ ಮೇಯಿಸುತ್ತಿದ್ದೆ. 9ನೇ ವಯಸ್ಸಿನಲ್ಲಿ ಅಂಧತ್ವ ಬಂದಿತು. ತಾಯಿ ನನ್ನನ್ನು ಅಂಧಮಕ್ಕಳ ಶಾಲೆಗೆ ಸೇರಿಸಿದರು. ಸರ್ಕಾರದ ಸವಲತ್ತಿನಲ್ಲೇ ಶಿಕ್ಷಣ ಪಡೆದು, ಹೊಟ್ಟೆಪಾಡಿಗಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದೆ. ಐಎಎಸ್ ಪರೀಕ್ಷೆ ಬರೆಯಲು ಪ್ರೇರೇಪಿಸಿದ ಪತ್ನಿ ಅಚಿಂತಾ ಅವರೇ ನಿಜವಾದ ಐಎಎಸ್ ಅಧಿಕಾರಿ’ ಎಂದರು.