ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ. ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್ ನಡುವಣ ಸ್ಪರ್ಧೆಯ ಫಲಿತಾಂಶ ಸಂಜೆಯ ಹೊತ್ತಿಗೆ ಪ್ರಕಟವಾಗುವ ನಿರೀಕ್ಷೆ ಇದೆ.
ಬೆಳಗ್ಗೆ 11 ಗಂಟೆಗೆ ಎಣಿಕೆ ಆರಂಭವಾಗಲಿದೆ. ಎಲ್ಲ ರಾಜ್ಯಗಳಿಂದ ಮತಪೆಟ್ಟಿಗೆಗಳು ಮಂಗಳವಾರವೇ ಸಂಸತ್ ಭವನಕ್ಕೆ ತಲುಪಿವೆ. ಲೆಕ್ಕಾಚಾರ ಪ್ರಕಾರ ಕೋವಿಂದ್ ಅವರ ಗೆಲುವು ಬಹುತೇಕ ಖಚಿತ.