‘ರೋಗಿಯ ಜೊತೆ ಇರುವವರಿಗೆ ಮಲಗಲು ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ. ಇದನ್ನು ಗಮನಿಸಿದ ಸೀತಾರಾಮ ಶೆಟ್ಟಿ, ಆಸ್ಪತ್ರೆಯ ಹಾಸಿಗೆ ಮತ್ತು ಹೊದಿಕೆಗಳನ್ನು ಇರಿಸುವ ಉಗ್ರಾಣದಲ್ಲಿ ಬಾಲಕನಿಗೆ ಮಲಗಲು ವ್ಯವಸ್ಥೆ ಮಾಡುವುದಾಗಿ ತಿಳಿಸಿ ಕರೆದೊಯ್ದಿದ್ದ. ಒಮ್ಮೆ ಬಾಲಕನನ್ನು ಉಗ್ರಾಣದಲ್ಲಿ ಬಿಟ್ಟು ಬಂದಿದ್ದ ಆತ, ರಾತ್ರಿ ಪುನಃ ಅಲ್ಲಿಗೆ ಹೋಗಿದ್ದ. ಆಗ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಬೆಳಿಗ್ಗೆ ಸಂತ್ರಸ್ತ ಬಾಲಕ ಕೆಲವರ ಬಳಿ ಈ ವಿಷಯ ಹೇಳಿಕೊಂಡಿದ್ದ. ಆಗ ನಾಪತ್ತೆಯಾಗಿದ್ದ ಆರೋಪಿ, ಮಂಗಳವಾರ ಸಂಜೆಯವರೆಗೂ ಕೆಲಸಕ್ಕೆ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.