ನರಗುಂದದಿಂದ ಇಲ್ಲಿಗೆ ಬಂದಿದ್ದ ರೈತ ಮುಖಂಡರೊಂದಿಗೆ ಮಾತನಾಡಿದ ಅವರು, ‘ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಜೊತೆ ಚರ್ಚಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಧಾರವಾಡಕ್ಕೆ ಬರುತ್ತಿದ್ದು, ಅವರು ನರಗುಂದಕ್ಕೆ ತೆರಳಲು ಬಯಸಿದರೆ ಅವರೊಂದಿಗೆ ನಾನೂ ಹೋಗಲು ಸಿದ್ಧ’ ಎಂದರು.