ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ - 2013ರ ಅಧಿನಿಯಮ 16ರ ಪ್ರಕಾರ, ಸ್ವತಂತ್ರ ಕರ್ನಾಟಕ ರಾಜ್ಯ ಆಹಾರ ಆಯೋಗವು ಸ್ಥಾಪನೆಯಾಗಿದ್ದು, ಆಯೋಗದ ಅಧ್ಯಕ್ಷರಾಗಿ ಡಾ. ಎನ್.ಕೃಷ್ಣಮೂರ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯೋಗದ ಸದಸ್ಯರಾಗಿ ವಿ.ಬಿ.ಪಾಟೀಲ್, ಎಚ್.ವಿ. ಶಿವಶಂಕರ, ಡಿ.ಜಿ. ಹಸಬಿ, ಮಂಜುಳಾ ಮತ್ತು ಬಿ.ಎ. ಮಹಮದ್ ಅಲಿ ನೇಮಕಗೊಂಡಿದ್ದಾರೆ. ಶಾಂತಾ ಎಲ್. ಹುಲ್ಮನಿ ಪದನಿಮಿತ್ತ ಸದಸ್ಯರಾಗಿ ಕಾರ್ಯ ನಿರ್ವಹಿಸುವರು. ವಿವರಗಳಿಗೆ ಕಚೇರಿಯ ದೂರವಾಣಿ ಸಂಖ್ಯೆ 080 22264966 ಸಂಪರ್ಕಿಸಬಹುದು.