ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಆಕಾಂಕ್ಷಿಗಳ ದಾಖಲಾತಿ ಪರಿಶೀಲನೆ ಬುಧವಾರ ರಾತ್ರಿ ಪೂರ್ಣಗೊಂಡಿತು. ಆದರೆ, ಇತರೆ ಹಿಂದುಳಿದ ವರ್ಗದ (ಒಬಿಸಿ) ಕೋಟಾದಡಿ ವೈದ್ಯಕೀಯ ಸೀಟು ನೀಡುವಂತೆ ಒತ್ತಾಯಿಸಿ ಹೊರರಾಜ್ಯಗಳ 40ರಿಂದ 50 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗದ್ದಲ ಉಂಟು ಮಾಡಿದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.