ಬಳ್ಳಾರಿ: ಹಳೇ ಕಟ್ಟಡವನ್ನು ಕೆಡಹುವ ಸಂದರ್ಭ ಸಜ್ಜೆ ಕುಸಿದು ಕಾರ್ಮಿಕರೊಬ್ಬರು ಮೃತ ಪಟ್ಟು ಇನ್ನೊಬ್ಬರು ಗಾಯಗೊಂಡ ಘಟನೆ ನಗರದ ಗ್ರಹಾಂ ರಸ್ತೆಯಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ 11ರ ವೇಳೆಗೆ ದುರಂತ ಸಂಭವಿಸಿದ್ದು, ಚಿತ್ರದುರ್ಗ ಜಿಲ್ಲೆಯ ಗೌರಸಮುದ್ರ ಗ್ರಾಮದ ಪರಮೇಶ(35) ಮೃತ ದುರ್ದೈವಿ.
ಇಲ್ಲಿನ ಸುಂಕಲಮ್ಮ ದೇಗುಲದ ಮುಂಭಾಗದಲ್ಲಿದ್ದ ಕಟ್ಟಡದಲ್ಲಿ ಹಲವು ಕಿರಾಣಿ ಅಂಗಡಿಗಳಿದ್ದವು. ಜಾಯ್ ಐಸ್ ಕ್ರೀಂ, ಭಾರತ್ ಬಿಸ್ಕೆಟ್ ಗೋದಾಮಾಗಿದ್ದ ಈ ಕಟ್ಟಡ ಕೆಡಹುವ ಕಾರ್ಯ ಕಳೆದ 15 ದಿನದಿಂದ ನಡೆಯುತ್ತಿತ್ತು.
ಅಗ್ನಿಶಾಮಕ ದಳ, 108 ತುರ್ತು ವಾಹನ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.