ಆದರೆ, ತರಕಾರಿ ಹೆಚ್ಚು ಬೆಳೆಯುವ ಚಿಲವಾಡಗಿ ಪ್ರದೇಶದ ರೈತರು ಹೇಳುವ ಪ್ರಕಾರ, ‘ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದೆ ಟೊಮೆಟೊ ಬೆಳೆಯುವುದೇ ಅಸಾಧ್ಯವಾಗಿದೆ. ಇದು ಉತ್ಪಾದನೆಯ ಮೇಲೇ ಪರಿಣಾಮ ಬೀರಿದೆ. ಸಹಜವಾಗಿ ನಾವು ಮಾರುಕಟ್ಟೆಗೆ ಕೊಡುವುದಾದರೂ ಹೇಗೆ’ ಎಂದು ಮರು ಪ್ರಶ್ನೆ ಹಾಕುತ್ತಾರೆ.
ಆದರೆ, ಇತರ ತರಕಾರಿಗಳು ಹೇಗೆ ಬೆಲೆ ಸ್ಥಿರತೆ ಕಾಯ್ದುಕೊಂಡಿವೆ ಎಂಬ ಪ್ರಶ್ನೆಗೆ ನಿಖರ ಉತ್ತರ ಸಿಗುತ್ತಿಲ್ಲ.