ನೆಲಮಂಗಲ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ತೀವ್ರ ದಾಳಿಗಳಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಐರಾವತ ಆನೆಯನ್ನೂ ಬಂಧಿಸಿ ರಂಗನ ಜೊತೆಗೆ ಕ್ರಾಲ್ನಲ್ಲಿ (ಮರದ ದಿಮ್ಮಿಗಳು) ಪಳಗಿಸಲಾಗಿತ್ತು. ಜೂನ್ 29ರಂದು ರಂಗನನ್ನು, ಜುಲೈ 1ರಂದು ಐರಾವತನನ್ನು ಕ್ರಾಲ್ನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಸೀಗೆ ಕಟ್ಟೆಯ ಬಯಲಿನ ಬಳಿ ಮಾವುತರು, ಅರಣ್ಯ ಇಲಾಖೆಯ ವೈದ್ಯರು ಆನೆಗಳ ನೆರವಿನಿಂದ ತರಬೇತಿ ನೀಡಿದ್ದರು.