ಧಾರವಾಡ: ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಗೀತೆ ಇದ್ದಾಗಲೂ ನಾಡಗೀತೆ ಇಲ್ಲವೇ? ಹಾಗೆಯೇ ಪ್ರತ್ಯೇಕ ಧ್ವಜ ಬೇಕು ಅಂತಾ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿಳಿಸಿದರು.
ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ವಿಚಾರದಲ್ಲಿ ಯಡಿಯೂರಪ್ಪ ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಸಂವಿಧಾನ ಓದಿಕೊಳ್ಳಲ್ಲಿ ಎಂದರು.
ಸಾಲಮನ್ನಾ: ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುತ್ತಿದೆ ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡುವುದಕ್ಕೆ ಈ ಪ್ರಶ್ನೆ ಬರಲ್ಲ ಎಂದರು.
ಈ ಸರ್ಕಾರ ರೈತ ಪರ ಸರ್ಕಾರ ಅಲ್ಲ , ನೀವು ಸಾಲ ಮನ್ನಾ ಮಾಡಿ, ನಾವೂ ಸಾಲ ಮನ್ನಾ ಮಾಡಿಸ್ತೇವೆ ಅಂದವರು ಈಗ ಸುಮ್ಮನಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು.