ಬೆಳೆಸಾಲ, ಬೆಳೆವಿಮೆ, ಬೆಳೆನಷ್ಟ ಮೊದಲಾದ ಸೌಲಭ್ಯಗಳನ್ನು ಪಡೆದುಕೊಳ್ಳಳು ರೈತರು ಸಂಬಂಧಪಟ್ಟ ಇಲಾಖೆಗಳಿಗೆ ಜಮೀನಿನ ಮೂಲ ಪಹಣಿಯನ್ನು ನೀಡಬೇಕಾಗುತ್ತದೆ. ಮೂಲ ಪಹಣಿ ಇಲ್ಲದಿದ್ದರೆ ರೈತರ ಅರ್ಜಿಯನ್ನು ರದ್ದು ಮಾಡಲಾಗುತ್ತದೆ. ಈ ಕಾರಣದಿಂದ ಎಲ್ಲ ರೈತರೂ ಪಹಣಿ ಪಡೆಯಲು ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದ್ದಾರೆ.