ಚಿಲ್ಲರೆ ಮಾರಾಟ ಸಂದರ್ಭದಲ್ಲಿ (ಬಿಟುಸಿ) ಹಲವಾರು ಸವಾಲುಗಳು ಎದುರಾಗುತ್ತಿವೆ. ಜಿಎಸ್ಟಿ ದರ, ಸರಕುಗಳ ವರ್ಗೀಕರಣದ ವಿವರ ಮತ್ತು ಮಾರಾಟವಾದ ಪ್ರತಿಯೊಂದು ಸರಕಿನ ತೆರಿಗೆ ವಿವರಗಳನ್ನು ಒದಗಿಸಬೇಕೆಂಬ ಜಿಎಸ್ಟಿ ನಿಯಮಗಳು ಗೊಂದಲಕ್ಕೆ ಎಡೆ ಮಾಡಿಕೊಟ್ಟಿವೆ. ಅವುಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಸಂಘವು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದೆ.