‘ಕರ್ನಾಟಕ ಈಗ ತನ್ನ ವಾದವನ್ನು ಮಂಡಿಸುತ್ತಿದ್ದು, ನಿಮ್ಮ ಸರದಿ ಬಂದಾಗ ನಿಮ್ಮ ವಿಚಾರಗಳನ್ನು ಮಂಡಿಸಿ’ ಎಂದು ನ್ಯಾಯಪೀಠ ತಾಕೀತು ಮಾಡಿತು.
ಬೆಂಗಳೂರಿನ ಜನರ ಅಗತ್ಯಗಳಿಗಾಗಿ ಕಾವೇರಿ ನೀರನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಬೇಕಿದೆ ಎಂದು ಹೇಳಿದ ಅವರು, ಲಭ್ಯ ಅಂತರ್ಜಲದ ಪ್ರಮಾಣ ಕುರಿತು ತಮಿಳುನಾಡು ತಪ್ಪು ಮಾಹಿತಿ ನೀಡಿದೆಯಲ್ಲದೆ, ಅಂತರ್ಜಲವನ್ನು ಸಮರ್ಪಕವಾಗಿ ಬಳಸದೆ ಪೋಲು ಮಾಡುತ್ತಿದೆ ಎಂದು ದಿವಾನ್ ಹೇಳಿದರು.