ಕಕ್ಕೇರಾ: ‘15 ದಿನಗಳಿಂದ ಮೋಡ ತುಂಬಿ ತುಳುಕುತೈತ್ರೀ, ಆದರೆ ಮಳೆ ಮಾತ್ರ ಬರವಲ್ಲದು ಹೀಗೆ ಆದರೆ ನಮ್ಮ ಬೆಳೆಗೆ ಇನ್ನೇಲ್ಲಿ ಬೆಲೆ ಬರುವುದ್ರಿ, ಹಿಂಗಾದ್ರ ಜೀವನ ಸಾಗಿಸುವುದು ಕಷ್ಟರೀ’ ಇದು ಬೆಣಸಿಗಡ್ಡಿಯ ರೈತ ಅಮರೇಶ ಅವರ ಮಾತು. ಪಟ್ಟಣದ ಸುತ್ತ ಮುತ್ತಲಿನ ರೈತರು ಬೆಳೆದ ಹತ್ತಿ, ತೊಗರಿ, ಶೇಂಗಾ, ಇನ್ನು ಮುಂತಾದ ಬೆಳೆಗಳನ್ನು ಬಿತ್ತಿ ಮಳೆಯಿಲ್ಲದೆ ಕಂಗಾಲಾಗಿದ್ದಾರೆ.