ಗ್ರಾಮಸ್ಥರಾದ ಸಿದ್ದು ತನಶಾಳ, ಗಂಗಪ್ಪ ಜೇವರ್ಗಿ, ಕಮಲಾಕರ ರೂಗಿ, ಶರಣಬಸು ಹಿರೇಮಠ, ಶ್ರೀಮಂತ ಕಲ್ಲೂರ ಇದ್ದರು. ಸಹಾಯಕ ಆಯುಕ್ತ ಭೇಟಿ: ಪ್ರತಿಭಟನಾ ನಿರತ ಮಕ್ಕಳೊಂದಿಗೆ ಸಹಾಯಕ ಆಯುಕ್ತ ರಾಚಪ್ಪ ಹಾಗೂ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಉಪ ತಹಶೀಲ್ದಾರ ಪಿ.ಜಿ.ಪವಾರ್, ಹಿಂಚಗೇರಿ ಗ್ರಾಮಕ್ಕೆ ಭೇಟಿ ನೀಡಿ ಶಿಕ್ಷಕರು ಮತ್ತು ಪಾಲಕರು ಮಕ್ಕಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ಸಹಾಯಕ ಆಯುಕ್ತರಿಗೆ ಶಾಲೆ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.