ಹಿರೇಕೆರೂರ: ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಮಧ್ಯದಲ್ಲಿ ಹಾಯ್ದು ಹೋಗಿರುವ ಹಾವೇರಿ–ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಾಗೂ ಗುಂಡಿ ಬಿದ್ದ ರಸ್ತೆಯಿಂದ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ವಿಸ್ತರಣೆಗಾಗಿ ಅಲ್ಲಲ್ಲಿ ರಸ್ತೆ ಬದಿಯ ನೂರಾರು ಮನೆ, ಕಟ್ಟಡಗಳನ್ನು ಒಡೆದು ಹಾಕಲಾಗಿದೆ. ಬೇಸಿಗೆಯಲ್ಲಿ ದೂಳಿಗೆ ಕಾರಣವಾಗಿದ್ದ ಪ್ರದೇಶವು, ಇದೀಗ ಮಳೆ ಸುರಿಯುತ್ತಿರುವ ಕಾರಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.