ಫರಿದಾಬಾದ್: ವಾಮಾಚಾರಕ್ಕಾಗಿ 3 ವರ್ಷದ ಮಗಳನ್ನೇ ಬಲಿ ಕೊಟ್ಟ ಅಪ್ಪನನ್ನು ಇಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ನಿವಾಸಿ ಧೀರಜ್ ಕುಮಾರ್ ಬಂಧಿತ ಆರೋಪಿ. ಕಳೆದ ಜುಲೈ 11 ರಂದು ನನ್ನ ಮೂರು ವರ್ಷದ ಮಗಳು ಸೋನಾಕ್ಷಿ ಕಾಣೆಯಾಗಿದ್ದಾಳೆ ಎಂದು ಆರೋಪಿ ಧೀರಜ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೋನಾಕ್ಷಿ ಪತ್ತೆಗಾಗಿ ಸ್ಥಳೀಯ ಪೊಲೀಸರು ತನಿಖೆ ನಡೆಸಲು ಮುಂದಾದರು. ಮೊದಲಿಗೆ ಧೀರಜ್ ಕುಮಾರ್ ನಿವಾಸದ ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು.
ಜುಲೈ 11 ರಂದು ಸಂಜೆ ಮಗಳು ಸೋನಾಕ್ಷಿಯನ್ನು ಸ್ಕೂಟರ್ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಅದೇ ರಸ್ತೆಯಲ್ಲಿ ವಾಪಾಸು ಬರುವಾಗ ದೀರಜ್ ಕುಮಾರ್ ಒಬ್ಬರೆ ಬಂದಿದ್ದರು.
ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಾಮಾಚಾರಕ್ಕಾಗಿ ಮಗಳನ್ನು ನದಿಗೆ ಎಸೆದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.