ಧಾರ್ಮಿಕ ಸೈನಿಕರನ್ನು ನೇಮಕ ಮಾಡುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ವಿಹಿಂಪ ವಿಭಾಗೀಯ ಮುಖ್ಯಸ್ಥ ರಾಮ್ ಕುಮಾರ್ ಆರ್ಯ, ಬಜರಂಗದಳದಲ್ಲಿ ತರಬೇತಿ ಪಡೆದಿರುವ ಕಾರ್ಯಕರ್ತರನ್ನು ಆಲಿಗಢ ಜಿಲ್ಲೆಯಲ್ಲಿ ಧಾರ್ಮಿಕ ಸೈನಿಕರಾಗಿ ನೇಮಕ ಮಾಡಲಾಗುವುದು. ಈ ಸೈನಿಕರು ಗೋವುಗಳ ಕಳ್ಳ ಸಾಗಣೆ ಮತ್ತು ಲವ್ ಜಿಹಾದ್ನ್ನು ನಿಯಂತ್ರಿಸಲಿದ್ದಾರೆ. ಅಷ್ಟೇ ಅಲ್ಲದೆ ಹಿಂದೂ ಹುಡುಗ-ಹುಡುಗಿ, ಮಠ, ಸಂತ ಸಮಾಜ ಮತ್ತು ದೇಶದ ರಕ್ಷಣೆಗೆ ಈ ಸೈನಿಕರು ಬದ್ಧರಾಗಿರುತ್ತಾರೆ ಎಂದಿದ್ದಾರೆ.