ಕೌಟುಂಬಿಕ ಸಮಸ್ಯೆಗಳೊಂದಿಗೆ ಶೋಷಣೆಗೆ ಒಳಗಾಗುತ್ತಿರುವ ಯುವ ಜನರಲ್ಲಿ ಆತ್ಮ ವಿಶ್ವಾಸದ ಕೊರತೆ ಮತ್ತು ಹತಾಶ ಮನೋಭಾವಗಳು ದುರಂತಗಳಿಗೆ ದಾರಿ ಮಾಡಿ ಕೊಡುತ್ತಿದೆ. ಈ ಪರಿಸ್ಥಿತಿಯಲ್ಲಿ ಯುವ ಸ್ಪಂದನ ಕೇಂದ್ರ ಸ್ವಾಭಿಮಾನಿ ಸಮೃದ್ಧ ಬದುಕಿನ ದಾರಿ ತೋರಬಲ್ಲ ಆಶಾಕಿರಣವಾಗಿ ಕಾರ್ಯವೆಸಗುತ್ತಿದೆ ಎಂದು ಅವರು ಹೇಳಿದರು.